Quantcast
Channel: News – Vishwa Samvada Kendra
Viewing all articles
Browse latest Browse all 1745

ಸರಸಂಘಚಾಲಕರಿಂದ ವಿದೇಶಿ ಪತ್ರಕರ್ತರ ಭೇಟಿ

$
0
0

ನವ ದೆಹಲಿ:   ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂಜನೀಯ ಸರಸಂಘಚಾಲಕ ಶ್ರೀ ಮೋಹನ್ ಭಾಗವತರು ಇಂದು ನವ ದೆಹಲಿಯಲ್ಲಿ 30 ಕ್ಕೂ ಹೆಚ್ಚು ದೇಶಗಳ ಮಾಧ್ಯಮ ಪ್ರತಿನಿಧಿಗಳೊಡನೆ  ಭೇಟಿ ನಡೆಸಿದರು.

ಈ ಸಂದರ್ಭದಲ್ಲಿ 50 ಕ್ಕೂ ಹೆಚ್ಚಿನ ಮಾಧ್ಯಮ ಸಂಘಟನೆಗಳ 80ಕ್ಕೂ ಹೆಚ್ಚು ಪತ್ರಕರ್ತರು ಉಪಸ್ಥಿತರಿದ್ದರು.


ಇಂದು ನಡೆದಿರುವ ಕಾರ್ಯಕ್ರಮ ಸತತವಾಗಿ ನಡೆಯುವ ಪ್ರಕ್ರಿಯೆಯ ಭಾಗವಾಗಿದ್ದು ಈ ಮೂಲಕ ಸರಸಂಘಚಾಲಕರು
ಸಮಾಜದ ವಿಭಿನ್ನ ವರ್ಗಗಳೊಡನೆ ನಿರಂತರ ರಚನಾತ್ಮಕ ಸಂವಾದವನ್ನು ನಡೆಸುತ್ತಾರೆ.

ಈ ಸಂವಾದ ಸುಮಾರು ಎರಡೂವರೆ ಗಂಟೆಗಳ ಕಾಲ ನಡೆಯಿತು. ಶ್ರೀ ಮೋಹನ್ ಭಾಗವತರು ವಿದೇಶಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂಘದ ದೃಷ್ಟಿಕೋನ ಮತ್ತು ಕಾರ್ಯದ ಕುರಿತಾದ  ಮಾಹಿತಿಯನ್ನು ಹಂಚಿಕೊಂಡರು.
ಇದರ ನಂತರ ನಡೆದ ಪ್ರಶ್ನೋತ್ತರದ ಅವಧಿಯಲ್ಲಿ ಅನೇಕ ವಿಷಯಗಳ ಮೇಲೆ ರಚನಾತ್ಮಕ ಚರ್ಚೆ ನಡೆಸಿದರು.


ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ಮಾನನೀಯ ಸುರೇಶ (ಭಯ್ಯಾಜೀ) ಜೋಶಿ , ಸಹ-ಸರಕಾರ್ಯವಾಹ ಡಾ.ಮನಮೋಹನ್ ವೈದ್ಯ, ಡಾ.ಕೃಷ್ಣಗೋಪಾಲ್  ಉತ್ತರ ಕ್ಷೇತ್ರದ ಸಂಘಚಾಲಕ ಡಾ.ಬಜರಂಗಲಾಲ್ ಗುಪ್ತ ಮತ್ತು ದೆಹಲಿಯ ಪ್ರಾಂತ ಸಂಘಚಾಲಕ ಕುಲಭೂಷಣ್ ಆಹುಜಾ ಜೀ ಯವರು ಉಪಸ್ಥಿತರಿದ್ದರು.

ಅರುಣ್ ಕುಮಾರ್
ಅಖಿಲ ಭಾರತೀಯ ಪ್ರಚಾರ ಪ್ರಮುಖ
ರಾಷ್ಟ್ರೀಯ ಸ್ವಯಂಸೇವಕ ಸಂಘ

24 ಸೆಪ್ಟೆಂಬರ್ ,2019

Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>