ನಿನ್ನೆಯ ಚೀನಾದ ಅಟಾಟೋಪದಿಂದ ಹುತಾತ್ಮರಾದ ಭಾರತದ ಸೈನಿಕರ ಬಲಿದಾನಕ್ಕೆ ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ಭೈಯ್ಯಾಜಿ ಜೋಶಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
“ದೇಶದ ಸಾರ್ವಭೌಮತೆ, ಅಖಂಡತೆ, ಮತ್ತು ಸ್ವಾಭಿಮಾನದ ರಕ್ಷಣೆಗಾಗಿ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಗಡಿ ರಕ್ಷಣೆ ಮಾಡುವಾಗ ಅತ್ಯುನ್ನತ ಬಲಿದಾನ ನೀಡಿ ಹುತಾತ್ಮರಾದ ಸೈನಿಕರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಶ್ರದ್ಧೆಯ ನಮನ ಸಲ್ಲಿಸುತ್ತದೆ. ಹುತಾತ್ಮ ಸೈನಿಕರ ಪರಿವಾರಕ್ಕೆ ದೇಶವಾಸಿಗಳ ಪರವಾಗಿ ಸಾಂತ್ವನ ಪ್ರಕಟಿಸುತ್ತದೆ. ಚೀನಾ ಸರ್ಕಾರ ಮತ್ತು ಸೇನೆಯ ಈ ಆಕ್ರಮಣಕಾರಿ ಮತ್ತು ಹಿಂಸಾತ್ಮಕ ಕೃತ್ಯವನ್ನು ಅತ್ಯಂತ ಕಠೋರವಾಗಿ ಖಂಡಿಸುತ್ತೇವೆ. ಸಂಕಟದ ಈ ಸಮಯದಲ್ಲಿ ನಾವೆಲ್ಲ ಭಾರತೀಯರು ಸಂಪೂರ್ಣವಾಗಿ ಭಾರತೀಯ ಸೇನೆ ಮತ್ತು ಸರ್ಕಾರದ ಜೊತೆಗಿದ್ದೇವೆ”
Image may be NSFW.
Clik here to view.
RSS pays homage to those valiant soldiers who made the supreme sacrifice in line of duty,at the borders in the Galwan Valley region of Ladakh to protect the sovereignty, integrity & dignity of the nation.”- Statement by Sarsanghchalak Dr.Mohanji Bhagwat & Sarkaryavah, Bhaiyaji Joshi
Image may be NSFW.
Clik here to view.