Quantcast
Channel: News – Vishwa Samvada Kendra
Viewing all articles
Browse latest Browse all 1745

ಆಪ್ತ ಸಲಹಗಾರರಾಗಲು ಸುವರ್ಣಾವಕಾಶ ಮಾರ್ಚ್ 13 ರಿಂದ ತರಗತಿಗಳು ಪ್ರಾರಂಭ

$
0
0

ಬೆಂಗಳೂರಿನ ಆಪ್ತ ಸಲಹಾ ಕೇಂದ್ರವು ಕಳೆದ ಕೆಲವು ವರ್ಷಗಳಿಂದ ಸಮಾಜದ ಮಾನಸಿಕ ಸ್ವಾಸ್ಥ್ಯವನ್ನು ಸುಧಾರಿಸಿ ಸಮಾಜದ ಆರೋಗ್ಯವನ್ನು ಕಾಪಾಡುವ ಕಾರ್ಯದಲ್ಲಿ ತೊಡಗಿದೆ. ಪ್ರತಿಷ್ಠಿತ ನಿಮ್ಹಾನ್ಸ್  ಮತ್ತು ಸಮಾಧಾನ ಸಂಸ್ಥೆಯಿಂದ ತರಬೇತಿ ಪಡೆದ 400ಕ್ಕೂ ಹೆಚ್ಚು ಆಪ್ತ ಸಲಹಾಗಾರರು ಉಚಿತವಾಗಿ ಈ ಕಾರ್ಯದಲ್ಲಿ ತೊಡಗಿದ್ದಾರೆ. ಅದೇ ರೀತಿಯಲ್ಲಿ ಈಗ ಸಮಾಧಾನ ಸಂಸ್ಥೆಯ ಅಡಿಯಲ್ಲಿ ಆಪ್ತ ಸಲಹಾಗಾರರಾಗಿ ಪರಿಣತಿ ಪಡೆಯಲು ಹೊಸಬರಿಗೆ ಅವಕಾಶವನ್ನು ಕಲ್ಪಿಸಲಾಗಿದೆ.

ನಿಮ್ಹಾನ್ಸ್  ಸಂಸ್ಥೆಯ ಮಾಜಿ ಪ್ರಾಧ್ಯಾಪಕರಾದ ಡಾ. ಸಿ. ಆರ್. ಚಂದ್ರಶೇಖರ್ ಅವರಿಂದ 2007 ರಲ್ಲಿ ಪ್ರಾರಂಭವಾದ ಸಮಾಧಾನ ಸಂಸ್ಥೆಯು 20,000ಕ್ಕೂ ಹೆಚ್ಚು ಜನರ ಬಾಳಿನಲ್ಲಿ ಸಮಾಧಾನ ತರಿಸಿದೆ. ಅಲ್ಲದೆ 1500ಕ್ಕೂ ಹೆಚ್ಚು ಮಂದಿಗೆ ಆಪ್ತ ಸಲಹಾಗಾರರಾಗಲು ತರಬೇತಿ ನೀಡಿದ್ದಾರೆ. ಅವರು 50ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ಅನೇಕ ಪ್ರಶಸ್ತಿಗಳನ್ನೂ‌ ಪಡೆದಿದ್ದಾರೆ.

ಡಾ. ಸಿ. ಆರ್. ಚಂದ್ರಶೇಖರ್

ಡಾ. ಸಿ. ಆರ್. ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ನಮ್ಮ ಮುಂದಿನ ತರಗತಿಗಳು ಮಾರ್ಚ್ 13 ರಿಂದ ಪ್ರಾರಂಭವಾಗುತ್ತವೆ. 40 ವರ್ಷ ಮೇಲ್ಪಟ್ಟ, ಸಮಾಜದ ಬಗ್ಗೆ ಕಾಳಜಿಯಿರುವ ವ್ಯಕ್ತಿಗಳು ಈ ತರಗತಿಗಳಿಗೆ  ನೊಂದಾಯಿಸಿಕೊಳ್ಳಬಹುದಾಗಿದೆ.  ಸಂಸ್ಥೆಯವರು ರೂ.500/- ಬೆಲೆಯ ಪುಸ್ತಕಗಳನ್ನು  ಕೋರಿಯರ್ ಮಾಡುತ್ತಾರೆ. ಪ್ರತಿ ಶನಿವಾರ ಮತ್ತು ಭಾನುವಾರ ದಿನಕ್ಕೆ  2 ಗಂಟೆಗಳಂತೆ ಒಟ್ಟು 10 ತರಗತಿಗಳು ಆನ್ಲೈನ್ ಮುಖಾಂತರ ನಡೆಯುತ್ತವೆ. ತರಗತಿಗಳಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು. ಈ ತರಬೇತಿಯ ಶುಲ್ಕ ರೂ. 1000/.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ  ಶ್ರೀ ರಾಜಶೇಖರ್ ಅವರನ್ನು ಅವರ ಮೊಬೈಲ್ ದೂರವಾಣಿ ಸಂಖ್ಯೆಯಾದ  8088089090 ಇಲ್ಲಿ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ website: ask4support.in ಅನ್ನೂ ಗಮನಿಸಬಹುದು ಎಂದು ಆಪ್ತ ಸಲಹಾ ಕೇಂದ್ರದ ಪ್ರಕಟಣೆ ತಿಳಿಸಿದೆ.


Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>