Clik here to view.

ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದ ರಾಷ್ಟ್ರೀಯ ಪುರಾತತ್ವ ಇಲಾಖೆಯಿಂದ (ಎಎಸ್ಐ, ASI) ಸರ್ವೇ ನಡೆಸಲು ವಾರಾಣಸಿಯ ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿದೆ.
- ಕಾಶಿ ವಿಶ್ವನಾಥ ಮಂದಿರವನ್ನು ಮಹಾರಾಜ ವಿಕ್ರಮಾದಿತ್ಯ 2,050 ವರ್ಷಗಳ ಹಿಂದೆ ಕಟ್ಟಿದ್ದ.
- ಮೊಘಲ್ ದೊರೆ ಔರಂಗಜೇಬನು ಕ್ರಿ.ಶ. 1,664ರಲ್ಲಿ ಈ ದೇವಸ್ಥಾನವನ್ನು ಧ್ವಂಸಗೊಳಿಸಿ, ಆ ಅವಶೇಷಗಳನ್ನು ಬಳಸಿ ಮಸೀದಿ ನಿರ್ಮಿಸಿದ. ಇದನ್ನೇ ಜ್ಞಾನವಪಿ ಮಸೀದಿ ಎನ್ನಲಾಗುತ್ತಿದೆ.
ವಾರಾಣಸಿಯಲ್ಲಿ ಈಗಿರುವ ಜ್ಞಾನವಪಿ ಮಸೀದಿಯ ಭೂಮಿಯು ಕಾಶಿ ವಿಶ್ವನಾಥ ದೇವಾಲಯಕ್ಕೆ ಸೇರಿದ್ದು, ಅದನ್ನು ದೇವಾಲಯಕ್ಕೆ ಹಸ್ತಾಂತರಿಸಬೇಕು ಎಂದು ವಿಜಯ ಶಂಕರ ರೋಷ್ಟಗಿ ಎಂಬ ವಕೀಲರೊಬ್ಬರು ಡಿಸೆಂಬರ್ 2019ರಲ್ಲಿ ದಾಖಲಿಸಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. ಜೊತೆಗೆ ಸರ್ವೇಯ ವೆಚ್ಚವನ್ನು ಉತ್ತರ ಪ್ರದೇಶ ಸರ್ಕಾರ ಭರಿಸುವಂತೆ ಸೂಚಿಸಿದೆ.