
ಮೈಸೂರು, ಮಾರ್ಚ್ 16: ಇದೇ ಮಾರ್ಚ್ 14ರಂದು ಮೈಸೂರು ಗ್ರಾಮಾಂತರ ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ವಿವಿಧ ವನವಾಸಿಗಳ ಹಾಡಿಗಳಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಸೇವಾಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.

ಸುಮಾರು 150ಕ್ಕೂ ಹೆಚ್ಚು ಹಾಡಿಯ ಬಂಧುಗಳಿಗೆ ಬಟ್ಟೆ,ಗೋಧಿಹಿಟ್ಟು,ಬೆಡ್ ಶೀಟ್ ಮಕ್ಕಳ ಆಟದ ಸಾಮಾನುಗಳು ಸೀರೆ ಪಂಚೆ ಟಿ-ಶರ್ಟ್ ವಿತರಿಸಲಾಯಿತು. ಹಾಗೂ ಧರ್ಮದ ಬಗ್ಗೆ ಹಾಡಿಯ ಬಂಧುಗಳಿಗೆ ಜಾಗೃತಿಯನ್ನು ಮೂಡಿಸಲಾಹಿತು. ಈ ಸಂದರ್ಭದಲ್ಲಿ ಬಜರಂಗದಳ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ, ಪ್ರಾಂತ ವಿಶೇಷ ಸಂಪರ್ಕ ಪ್ರಮುಖ್ ಮಂಜುನಾಥ ಸ್ವಾಮಿ ಮತ್ತು ವಿಹಿಂಪ್ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಮಹಾದೇವಪ್ಪ ಮತ್ತು ಸ್ಥಳೀಯ ಕಾರ್ಯಕರ್ತರು ಇದ್ದರು.

